ಪಿಯುಸಿ ವಿದ್ಯಾರ್ಥಿ ನಾಪತ್ತೆ – ದೂರು ದಾಖಲು

ಮಂಗಳೂರು: ಮಂಜೇಶ್ವರ ಠಾಣಾ ವ್ಯಾಪ್ತಿಯ ಅನಂತಗಿರಿ ನಿವಾಸಿ ಅಡ್ಯನಡ್ಕ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ (17) ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 25ರಂದು ಸಂಜೆ ತನ್ನ ಮನೆಯಿಂದ ದೊಡ್ಡಪ್ಪನ ಮನೆಗೆ ತೋಟಕ್ಕೆ ಮದ್ದು ಬಿಡುವ ಪಂಪು ತರಲು ಸ್ಕೂಟರ್ನಲ್ಲಿ ಅಂಕಿತ್ ತೆರಳಿದ್ದ. ಬಳ್ಳೂರು ಎಂಬಲ್ಲಿ ಸ್ಕೂಟರ್ ನಿಲ್ಲಿಸಿ ಬಸ್ ಹತ್ತಿ ಕುದ್ದುಪದವಿನಲ್ಲಿ ಇಳಿದಿರುತ್ತಾನೆ ಎಂದು ಹೇಳಲಾಗಿದೆ. ಆ ಬಳಿಕ ಅಂಕಿತ್ ನಾಪತ್ತೆಯಾಗಿದ್ದಾನೆ.