ನ.13 ರಂದು ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಬಗ್ಗೆ ವಿಶೇಷ ಚಿಕಿತ್ಸಾ ಶಿಬಿರ

 

ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಶಿಬಿರವು ನ. 13 ರಂದು ಭಾನುವಾರ ನಡೆಯಲಿದೆ.

ಮೂಲವ್ಯಾಧಿ (ಪೈಲ್ಸ್),ಭಗಂದರ(ಪಿಸ್ಟುಲಾ) ಮೊದಲಾದ ಗುದರೋಗಗಳ ತಪಾಸಣೆ,ಚಿಕಿತ್ಸೆ ಹಾಗೂ ಅವಶ್ಯಕತೆ ಇದ್ದಲ್ಲಿ ಕ್ಷಾರಚಿಕಿತ್ಸೆ ಬೆ.11 ಗಂಟೆಯಿಂದ ಅಪರಾಹ್ನ 3 ರ ತನಕ ಶಿಬಿರ ನಡೆಯಲಿದ್ದು ತಜ್ಞ ವೈದ್ಯರು ಭಾಗವಹಿಸಿ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ ಎಂದು ಅಯುರ್ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here