“ಕೊಟ್ಟದ್ದು ತನಗೆ ,ಬಚ್ಚಿಟ್ಟಿದ್ದು ಪರರಿಗೆ “-ಕಳ್ಳ ಹೂತಿಟ್ಟ ಹಣ ಸಿಕ್ಕಿದ್ದು ಜೆಸಿಬಿ ಚಾಲಕನಿಗೆ

ಮಂಗಳೂರು: ಮೂವತ್ತೈದಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕು ಪಡಂಗಡಿ-ಮದ್ದಡ್ಕ ನಿವಾಸಿ ಕುಂಞಿ ಮೋನು ಯಾನೆ ಜಾಫರ್‌ ಯಾನೆ ಹಮೀದ್‌ (48) ಬಂಧಿತ ಆರೋಪಿ. ಆರೋಪಿಯೂ ಮಂಗಳೂರಿನ ಹೂವಿನಂಗಡಿಯೊಂದರಿಂದ ಕದ್ದ ಹಣವನ್ನು ನೆಲ್ಲಕಾಯಿ ರಸ್ತೆಯ ಹಳೆಯ ಕಟ್ಟಡವೊಂದರ ಮಣ್ಣಿನಡಿ ಹೂತು ಹಾಕಿ ತಲೆಮರೆಸಿ ಕೊಂಡಿದ್ದ. ಆದರೆ “ಕೊಟ್ಟದ್ದು ತನಗೆ ,ಬಚ್ಚಿಟ್ಟಿದ್ದು ಪರರಿಗೆ ” ಎನ್ನುವಂತೆ ಆತನ ದುರಾದೃಷ್ಟಕ್ಕೆ ಎರಡೇ ದಿನಕ್ಕೆ ಆ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು.ಕಳ್ಳ ಹೂತಿಟ್ಟಿದ್ದ ಹಣ ಅಲ್ಲಿ ಕೆಲಸ ನಿರ್ವಸುತ್ತಿದ್ದ ಜೆಸಿಬಿ ಚಾಲಕನಿಗೆ ಸಿಕ್ಕಿದ್ದು ಆತ ಅದನ್ನು ಖರ್ಚು ಮಾಡಿದ್ದ. ಪೊಲೀಸರು ಹಳೇಯ ಕಳ್ಳತನ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಶಯದ ಮೇಲೆ ಆರೋಪಿ ಜಾಫರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆತ ಈ ವಿಚಾರ ಬಾಯ್ಬಿಟ್ಟಿದ್ದು ಹಣ ಹೂತಿಟ್ಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ.ಕಳವಾದ 9 ಲಕ್ಷ ರೂ. ಗಳಲ್ಲಿ 5.80 ಲಕ್ಷ ರೂ.ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here