ಮಡಿಕೇರಿ: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಂಗಾಲ ಎಂಬಲ್ಲಿ ಬುಟ್ಟಿಯಂಡ ಆರತಿ ಎಂಬ ಯುವತಿಯನ್ನು ಅಪರಿಚಿತನೊಬ್ಬ ಬರ್ಬರವಾಗಿ ಕತ್ತಿಯಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ನಂಗಾಲ ಗ್ರಾಮದ ಬುಟ್ಟಿಯಂಡ ಮಾದಪ್ಪ ಎಂಬವರ ಪುತ್ರಿ 24 ವರ್ಷ ಪ್ರಾಯದ ಆರತಿಯನ್ನು ರವಿವಾರ ರಾತ್ರಿ ಹತ್ಯೆ ಮಾಡಲಾಗಿದ್ದು ಈ ಕೊಲೆಯನ್ನು ಕಂದಂಗಳ ತಿಮ್ಮಯ್ಯ ಮಾಡಿದ್ದಾನೆಂದು ಹೇಳಲಾಗಿದೆ.ಹತ್ಯೆಯ ಬಳಿಕ ತಿಮ್ಮಯ್ಯ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ತಿಮ್ಮಯ್ಯಗೆ ಸೇರಿದ ಕೃಷಿ ಭೂಮಿಯ ಕೆರೆಯ ಬಳಿ ಒಂದು ಜೊತೆ ಚಪ್ಪಲಿ , ಮದ್ಯದ ಬಾಟಲಿ , ವಿಷ, ಮತ್ತು ಹೆಲ್ಮೆಟ್ ಪತ್ತೆಯಾಗಿದೆ. ಈ ಹತ್ಯೆಗೆ ಪ್ರೇಮ ಪ್ರಕರಣ ಕಾರಣವಾಗಿರಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.