ಬಸ್‌ ಅಪಘಾತದಲ್ಲಿ ಸುದೀಪ್‌ ಸಾವು- ಸಾರ್ಥಕತೆ ಮೆರೆದ ಪೋಷಕರು

ಕುಂದಾಪುರ : ಕಾಲೇಜು ವಿದ್ಯಾರ್ಥಿ ಓರ್ವ ಬಸ್ಸಿನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಹೆಮ್ಮಾಡಿ ಜಂಕ್ಷನ್‌ ಬಳಿ ನಡೆದಿದೆ. ಕಟ್ ಬೆಲ್ತೂರು ನಿವಾಸಿ ಕೋಟೇಶ್ವರ ಕಾಗೇರಿಯ ವರದರಾಜ ಎಂ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಸುದೀಪ್‌ ಪೂಜಾರಿ(20) ಮೃತ ದುರ್ದೈವಿ ಯುವಕ ಬಸ್‌ ನ ಮುಂಬಾಗಿಲ ಬಳಿ ನಿಂತಿದ್ದ ಸುದೀಪ್‌ ಆಯತಪ್ಪಿ ಕೆಳಗೆ ಬಿದ್ದು ಅವರ ಮೇಲೆ ಬಸ್‌ ನ ಮುಂದಿನ ಚಕ್ರ ಹರಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋಬ್ಬರ ಜೀವಕ್ಕೆ ಬೆಳಕಾಗಲಿ ಎಂಬ ಕಾರಣದಿಂದ ಮೃತ ಸುದೀಪ್‌ ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಆತನ ಪೋಷಕರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here