ಮಂಗಳೂರು ಅಮಿತ್ ಶಾ ರೋಡ್ ಶೋ ರದ್ದು
ಮಂಗಳೂರು: ದ.ಕ ಜಿಲ್ಲೆಯ ಮಂಗಳೂರಿನಲ್ಲಿ ಫೆ.11ರಂದು ನಿಗದಿಪಡಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ವನ್ನು ಭದ್ರತೆಯ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ. ಪದವಿನಂಗಡಿಯಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮ ಕೊರಗಜ್ಜನ ಕೋಲ ನಡೆಯಲಿರುವುದರಿಂದ ಶಾ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ ಎನ್ನಲಾಗಿದೆ.
ಆಂದ್ರದಲ್ಲಿ ಮೃತಪಟ್ಟ ಪತ್ನಿಯನ್ನು ಕಿ.ಮೀ ಗಟ್ಟಲೆ ಹೊತ್ತು ನಡೆದೊಯ್ದ ಒಡಿಶಾ ವ್ಯಕ್ತಿ
ಒಡಿಶಾ: ಆಂದ್ರ ಪ್ರದೇಶದ ಆಸ್ಪತ್ರೆಯಲ್ಲಿ ಮೃತಪಟ್ಟ ಪತ್ನಿಯನ್ನು ಒಡಿಶಾದ ಕೋರಾಪುಟ್ ಜಿಲ್ಲೆಯ ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಹಲವಾರು ಕಿ.ಮೀ ನಡೆದ ಘಟನೆ ನಡೆದಿದೆ. ಇದನ್ನು ಕಂಡ ಪೊಲೀಸರು ಪತ್ನಿಯ ಮೃತ ದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಚಿತೆಗೆ ಹಾರಿ ಆತ್ಮಹತ್ಯೆ
ಕೊಲ್ಲಂ: ಜಿಲ್ಲೆಯ ಪುತ್ತು ಎಂಬಲ್ಲಿ 68 ವರ್ಷದ ವ್ಯಕ್ತಿಯೊಬ್ಬ ತನ್ನ ಸ್ವಂತ ಚಿತೆಯನ್ನು ಸಿದ್ದ ಪಡಿಸಿ ಬೆಂಕಿ ಹಚ್ಚಿ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಜಯ ಕುಮಾರ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
2 ನೇ ಹಂತದ ಭಾರತ್ ಜೋಡೋ ಯಾತ್ರೆ
ದೆಹಲಿ: ಗುಜರಾತ್ ನ ಪೋರ್ ಬಂದರ್ ನಿಂದ ಅಸ್ಸಾಂವರೆಗೆ 2 ನೇ ಹಂತದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ತಿಂಗಳು ರಾಯಪುರದಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.
ತೆಂಗಿನಕಾಯಿ ತಲೆಗೆ ಬಿದ್ದು ಸಾವು
ಮಂಗಳೂರು: ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ಕಾಯಿಯೊಂದು ತಲೆಗೆ ಬಿದ್ದು ಕೃಷಿಕರೊಬ್ಬರು ಮೃತ ಪಟ್ಟ ಘಟನೆ ಕರಂಬಾರುವಿನ ಕಾಪಿನಡ್ಕದಲ್ಲಿ ನಡೆದಿದೆ. ಪ್ರಗತಿಪರ ಕೃಷಿಕ ಸತೀಶ್ ರಾವ್ ದಾರುಣವಾಗಿ ಸಾವಿಗೀಡಾದ ದುರ್ದೈವಿ.
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಿಎಸ್ ವೈ ಹೆಸರು?
ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಾವರ ಹೆಸರನ್ನಿಡಲು ಸಚಿವ ಸಂಪುಟ ನಿರ್ಧರಿಸಿದ್ದು, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ತಿಳಿಸಿದ್ದಾರೆ.