ಉಡುಪಿ : ನಾದಸ್ವರ ವಾದನ ಮತ್ತು ಸಾಕ್ಸೋ ಫೋನ್ ವಾಹನದಲ್ಲಿ ಪ್ರತಿಭಾವಂತ ಕಲಾವಿದ ಸಹೋದರರಾದ ಗಣೇಶ್ ದೇವಾಡಿಗ (52) ಮತ್ತು ರಾಘವೇಂದ್ರ ದೇವಾಡಿಗ (42) ಒಂದೇ ದಿನ ಕೆಲ ಘಂಟೆಗಳ ಅಂತರದಲ್ಲಿ ಮೃತಪಟ್ಟ ಹೃದಯ ಕಲಕುವ ಘಟನೆ ಫೆ.16ರಂದು ಬ್ರಹ್ಮಾವರದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇಬ್ಬರು ಸಹೋದರರು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗೆ ದಾಖಲಾಗಿದ್ದರು. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ರಾಘವೇಂದ್ರ ಫೆ.16ರಂದು ಬೆಳಿಗ್ಗೆ ಮೃತಪಟ್ಟರೆ, ಅಣ್ಣ ಗಣೇಶ್ ದೇವಾಡಿಗ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಲಾವಿದ ಸಹೋದರರ ಅಗಲುವಿಕೆಗೆ ನೂರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.