ಪುತ್ರ ಲೋಕಾಯುಕ್ತ ಬಲೆಗೆ – ಶಾಸಕ ವಿರೂಪಾಕ್ಷ ಅಜ್ಞಾತ ನೆಲೆಗೆ

ಬೆಂಗಳೂರು:ಚೆನ್ನಗಿರಿಯ ಶಾಸಕ  ಮಾಡಾಳ್‌ ವಿರೂಪಾಕ್ಷ ಪುತ್ರ ಪ್ರಶಾಂತ್‌ ಮಾಡಾಳ್‌ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದ ಬೆನ್ನಲ್ಲೆ ಶಾಸಕ ವಿರೂಪಾಕ್ಷ ತಲೆಮರೆಸಿಕೊಂಡಿದ್ದಾರೆ.

ಗುರುವಾರ ರಾತ್ರಿ ದಾವಣಗೆರೆಯ ಮನೆಯಿಂದ ಹೋದವರು ಅಜ್ಞಾತ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಎಫ್‌ಐಆರ್‌ ನಲ್ಲಿ ಏ-1 ಆರೋಪಿಯಾಗಿರುವ ಶಾಸಕರಿಗೆ ಲೋಕಾಯುಕ್ತ ನೋಟಿಸು ಜಾರಿ ಮಾಡಿದೆ. ಬಂಧನದ ಭೀತಿಯಲ್ಲಿರುವ ಶಾಸಕರು ಸಿ ಎಂ ಸೂಚನೆಯಂತೆ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ. ಮಗನ ಲಂಚಾವತಾರಕ್ಕೂ ತಮಗೂ ಸಂಬಂಧವಿಲ್ಲ, ನನ್ನ ವಿರುದ್ದ ಷಡ್ಯಂತ್ರ ನಡೆದಿದೆ ಎಂದು  ಶಾಸಕ ವಿರೂಪಾಕ್ಷ ಹೇಳಿದ್ದಾರೆ. ಆದರೆ ಪಕ್ಷಕ್ಕಾಗುವ  ಮುಜುಗರ ತಪ್ಪಿಸಲು ವರಿಷ್ಠರು ರಾಜಿನಾಮೆ ಪಡೆಯಬಹುದು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

LEAVE A REPLY

Please enter your comment!
Please enter your name here