ಕಡತ ವಿಲೇವಾರಿಗೆ ಒತ್ತಡ- ಜಿಲ್ಲಾಧಿಕಾರಿ ವಿರುದ್ದ ದೂರು- ವಿಚಾರಣೆ

ಮಂಗಳೂರು: ದ.ಕ ಜಿಲ್ಲಾಧಿಕಾರಿ ರವಿಕುಮಾರ್‌ ಎಂ ಆರ್‌ ನಿಯಮ ಮೀರಿ ಕಡತ ವಿಲೇವಾರಿ ಮಾಡಲು ಒತ್ತಡ ಹೇರಿದ ಆರೋಪ ಎದುರಿಸುತ್ತಿದ್ದು, ಅವರ ಅಧೀನ ಸಿಬ್ಬಂದಿ ಹಾಗೂ ಅಧಿಕಾರಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ . ಇದರಿಂದ ಈಗ ಜಿಲ್ಲಾಧಿಕಾರಿಯವರು ಪ್ರಾದೇಶಿಕಾಧಿಕಾರಿಯ ವಿಚಾರಣೆ ಎದುರಿಸುವಂತಾಗಿದೆ.

ದ.ಕ ಜಿಲ್ಲಾಧಿಕಾರಿ ರವಿಕುಮಾರ್‌ ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದು, ರಾಜಕೀಯ ಒತ್ತಡಕ್ಕೆಒಳಗಾಗಿ ಕಡತಗಳನ್ನು ನಿಯಮ ಮೀರಿ ವಿಲೇವಾರಿ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೂರು ಸಲ್ಲಿಸಿದ್ದರು. 

LEAVE A REPLY

Please enter your comment!
Please enter your name here