ಎ ಸಿ ಸ್ಪೋಟ – ತಾಯಿ, ಮಕ್ಕಳಿಬ್ಬರ ಸಜೀವ ದಹನ

ರಾಯಚೂರು: ಶಾರ್ಟ್ ಸರ್ಕ್ಯೂಟ್‌ ನಿಂದ ಎ ಸಿ ಸ್ಪೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಘಟನೆ ರಾಯಚೂರಿನ  ಶಕ್ತಿ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಆರ್‌ ಟಿ ಪಿಎಸ್‌ ನಲ್ಲಿ ಎಇಇ ಆಗಿರುವ ಸಿದ್ದಲಿಂಗಯ್ಯ ಸ್ವಾಮಿ ಅವರ ಪತ್ನಿ ರಂಜಿತಾ (33) , ಮಕ್ಕಳಾದ ಮೃದಲ್(13)‌, ತಾರುಣ್ಯ(5) ಮೃತಪಟ್ಟವರಾಗಿದ್ದಾರೆ. ರಂಜಿತಾ ಅವರು ಮಂಡ್ಯ ಮೂಲದವರಾಗಿದ್ದು, ಮದುವೆಯ ಬಳಿಕ ಪತಿಯೊಂದಿಗೆ ರಾಯಚೂರಿನಲ್ಲಿ  ನೆಲೆಸಿದ್ದರು. ಶಕ್ತಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

LEAVE A REPLY

Please enter your comment!
Please enter your name here