ಲಕ್ನೋ- ಕೊಲೆ ಆರೋಪಿಗಳ ಮುಂದುವರಿದ ಎನ್‌ ಕೌಂಟರ್

ಲಕ್ನೋ: ಉತ್ತರ ಪ್ರದೇಶಲ್ಲಿ ಮತ್ತೊಬ್ಬ ಕೊಲೆ ಆರೋಪಿಯನ್ನು ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ ಹೊಡೆದುರುಳಿಸಲಾಗಿದೆ. ‌

ಕುಖ್ಯಾತ ಪಾತಕಿ ಉಸ್ಮಾನ್‌ ಚೌದರಿಯ ಆಪ್ತ ವಿಜಯ್‌ ಕುಮಾರ್‌ ಎನ್‌ ಕೌಂಟರ್‌ ನಲ್ಲಿ ಸಾವನ್ನಪ್ಪಿದ್ದಾನೆ. 2005ರಲ್ಲಿ ಬಿಎಸ್‌ ಪಿ ಶಾಸಕ ರಾಜುಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಎಂಬವರನ್ನು ದುಷ್ಕರ್ಮಿಗಳು ಫೆ.23ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಉಸ್ಮಾನ್‌ ಚೌದರಿಯ ತಂಡ ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿತ್ತು. ಯು ಪಿಯ  ಕೌಂದಾರಿಯಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿಜಯ್‌ ಕುಮಾರ್‌ ಹತನಾಗಿದ್ದಾನೆ. 

LEAVE A REPLY

Please enter your comment!
Please enter your name here