ಪಾರಿವಾಳ ಪಂಜರಕ್ಕೆ…….

ಮಂಗಳೂರು: ತೆಂಕುಳಿಪಾಡಿ ಗ್ರಾಮದ ಕಾಜಲ ಪ್ರಕಾಶ್ ಶೆಟ್ಟಿ ಎಂಬವರಿಗೆ ಸೇರಿದ್ದ ಕಾಜಲ ಫಾರ್ಮ್ ನಿಂದ ನಾಲ್ಕು ದನಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಠಾಣೆ ಪೊಲೀಸರು ಅಬ್ದುಲ್ ಕರೀಂ ಯಾನೆ ಪಾರಿವಾಳ ಕಬೀರ್ ನನ್ನು ಬಂಧಿಸಿದ್ದಾರೆ.
ದನ ಕದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಕಬೀರ್ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ವಿಶೇಷ ಕಾರ್ಯಾಚರಣೆ ನಡೆಸಿದ ಬಜ್ಪೆ ಪೊಲೀಸರು ಕಬೀರ್ ನನ್ನು ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here