ಸುರತ್ಕಲ್ ಎನ್.ಐ.ಟಿ.ಕೆ. ಬಳಿ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಮಂಗಳೂರು: ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಐಷಾರಾಮಿ ಕಾರೊಂದು ಸುರತ್ಕಲ್ ಎನ್.ಐ,ಟಿ,ಕೆ ಬಳಿ ಹೆದ್ದಾರಿಯಲ್ಲೇ ಬೆಂಕಿಗಾಹುತಿಯಾಗಿದೆ.


ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರ ಸಕಾಲಿಕ ಸೂಚನೆಯಿಂದ ಕಾರಿನಲ್ಲಿದ್ದವರು ಕಾರನ್ನು ನಿಲ್ಲಿಸಿ ತಕ್ಷಣವೇ ಕೆಳಗಿಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಬ್ಯಾಟರಿ ಶಾರ್ಟ್ ನಿಂದಾಗಿ ಈ ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದ್ದು, ಘಟನೆ ನಡೆದ ತಕ್ಷಣವೇ ಕದ್ರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು. ಬಳಿಕ ತ್ವರಿತಗತಿಯಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅಧಿಕಾರಿಗಳು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಆದರೆ ಆ ಹೊತ್ತಿಗಾಗಲೇ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.
ಈ ಘಟನೆಯಿಂದಾಗಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

LEAVE A REPLY

Please enter your comment!
Please enter your name here