ರಾಮನವಮಿ ಆಚರಣೆ ವೇಳೆ ಬಾವಿಗೆ ಬಿದ್ದ 25 ಮಂದಿ

ಮಂಗಳೂರು:‌ ಇಂದೋರ್‌ ನ ಪ್ರಸಿದ್ಧ ಮಹಾದೇವ ಜುಲೇಲಾಲ್‌ ದೇವಾಲಯದಲ್ಲಿ ನಡೆಯುತ್ತಿದ್ದ ರಾಮನವಮಿ ಧಾರ್ಮಿಕ  ಕಾರ್ಯಕ್ರಮದ ವೇಳೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.

ರಾಮನವಮಿ ಕಾರ್ಯಕ್ರಮಕ್ಕೆ ನೂರಾರು ಮಂದಿ  ದೇವಾಲಯಕ್ಕೆ ಆಗಮಿಸಿದ್ದು ಕೆಲವರು ಬಾವಿ ಕಟ್ಟೆಯ ಮೇಲಿನ ರಕ್ಷಣಾ ಕವಚದ ಮೇಲೆ ನಿಂತಿದ್ದರು. ಭಾರ ತಡೆಯಲಾಗದೆ ರಕ್ಷಣಾ ಕವಚ ಕುಸಿದ ಕಾರಣ 25 ಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದಿದ್ದಾರೆ. ಇವರಲ್ಲಿ 10 ಮಂದಿಯನ್ನು ಈಗಾಗಲೇ ಮೇಲಕ್ಕೆತ್ತಿ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಎಂದು ಎನ್‌ ಡಿ ಟಿವಿ ಡಾಟ್‌ ಕಾಂ ವರದಿ ಮಾಡಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here