ಪಾಗಲ್‌ ಪ್ರೇಮಿಯ ಖತರ್ನಾಕ್‌ ಐಡಿಯಾ-ಎರಡು ಬಲಿ

ಮಂಗಳೂರು: ಛತ್ತೀಸ್ಗಡದ ಕಬೀರ್ ದಾಂ ನಲ್ಲಿ ಹೋಂ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸಿಡಿದು ಇಬ್ಬರು ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡ ಘಟನೆ ಹೊಸ ಆಶ್ಚರ್ಯಕರ ತಿರುವು ಪಡೆದಿದೆ. ಈ ಸಂಬಂಧ ಸರಜೂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಮಾಜಿ ಪ್ರೇಯಸಿ, ಬೇರೊಂದು ಯುವಕನ ಜೊತೆ ಮದುವೆಯಾಗುತ್ತಿರುವುದಕ್ಕೆ ಕೋಪಗೊಂಡ ಸರಜೂ ಸ್ಫೋಟಕಗಳನ್ನು ಇರಿಸಿ ಮದುವೆ ವೇಳೆ ಹೋಮ್ ಥಿಯೇಟರ್ ಉಡುಗೊರೆಯಾಗಿ ನೀಡಿದ್ದ. ಮದುವೆ ಕಾರ್ಯಕ್ರಮದ ಬಳಿಕ ವರ ಹೇಮೇಂದ್ರ ಮೆರಾವಿ ಹೋಂ ಥಿಯೇಟರ್ ಆನ್ ಮಾಡಲು ಪ್ಲಗ್ ಸಿಕ್ಕಿಸಿ ಸ್ವಿಚ್ ಹಾಕುತ್ತಿದ್ದಂತೆ ಸಿಸ್ಟಮ್ ಸಿಡಿದು ವರ ಹೇಮೇಂದ್ರ ಮೆರಾವಿ   ಮತ್ತು ಆತನ ಸಹೋದರ  ರಾಜ್‌ ಕುಮಾರ್ ಸಾವನ್ನಪ್ಪಿದ್ದರು.‌ ಸ್ಪೋಟದಿಂದ ಕೊಠಡಿಯ ಗೋಡೆ ಮತ್ತು ಚಾವಣಿ ಕುಸಿದು ಬಿದ್ದಿದೆ. ತನಿಖೆ ವೇಳೆ ಸಿಸ್ಟಮ್ ನಲ್ಲಿ ಸ್ಫೋಟಕ ಇದ್ದ ಬಗ್ಗೆ ತಿಳಿದ ಪೊಲೀಸರು ವಧುವಿಗೆ ಹೋಂ ಥಿಯೇಟರ್ ಉಡುಗೊರೆಯಾಗಿ ನೀಡಿದವರ ಮಾಹಿತಿ ಪಡೆದು ಹಳೆ ಪ್ರೇಮಿ ಸರಜೂನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here