ಗಾಳ ಹಾಕುವ ವೇಳೆ ಹೊಳೆಗೆ ಬಿದ್ದ ಕೂಲಿ ಕಾರ್ಮಿಕ ಮೃತ್ಯು

ಮಂಗಳೂರು: ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಹೊಳೆಗೆ ಬಿದ್ದು ಕೂಲಿ ಕಾರ್ಮಿಕರೋರ್ವ ಮೃತ ಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.

ಜೋಡುಕಲ್ಲಿನ ಶೇಖರ(48) ಮೃತಪಟ್ಟವರು. ಸ್ನೇಹಿತರ ಜೊತೆ ಪತ್ವಾಡಿ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದಾರೆ. ಜೊತೆಗಿದ್ದವರು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ರಕ್ಷಿಸುವಲ್ಲಿ ಸಫಲರಾಗಲಿಲ್ಲ.

LEAVE A REPLY

Please enter your comment!
Please enter your name here