ಜಾಲ್ಸೂರ್‌ ಕಾಳಮನೆ ಕತ್ತಾರ್‌ ಇಬ್ರಾಹಿಂ ಹಾಜಿ ನಿಧನ

ಮಂಗಳೂರು/ಜಾಲ್ಸೂರು:  ಜಾಲ್ಸೂರ್‌ ಸಮೀಪದ ಅಡ್ಕಾರ್‌ ನಿವಾಸಿ ಕತ್ತಾರ್‌ ಇಬ್ರಾಹಿಂ ಹಾಜಿ(72) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅಡ್ಕಾರು ಮೊಹಿಯುದ್ದೀನ್‌ ಜುಮ್ಮಾ ಮಸೀದಿ ಅಧ್ಯಕ್ಷರು, ಜಾಲ್ಸೂರು ಪಯಸ್ವಿನಿ ಎಜುಕೇಶನ್‌ ಸೊಸೈಟಿ ಉಪಾಧ್ಯಕ್ಷರಾಗಿರುವ ಕಾಳಮನೆ ಇಬ್ರಾಹಿಂ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು(ಜು.18) ಬೆಳಿಗ್ಗೆ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು,ಇಬ್ಬರು ಪುತ್ರಿಯರು ಸೇರಿದಂತೆ ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹ ಅಪರಾಹ್ನ 3 ಗಂಟೆ ವೇಳೆಗೆ ಜಾಲ್ಸೂರು ತಲುಪಲಿದ್ದು 5 ಗಂಟೆಗೆ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here