ಒಲೆ ಉರಿದರೆ ನಿಲ್ಲಬಹುದು-ಧರೆ ಹೊತ್ತಿ ಉರಿದರೆ ನಿಲ್ಲದು-ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಬಂಟ್ವಾಳ : 2023 ವರ್ಷದ ಕುರಿತಾಗಿ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭವಿಷ್ಯ ನುಡಿದಿರುವ ಸ್ವಾಮೀಜಿ “ಒಲೆ ಉರಿದರೆ ನಿಲ್ಲಬಹುದು-ಧರೆ ಹೊತ್ತಿ ಉರಿದರೆ ನಿಲ್ಲದು” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸಮಸ್ಯೆ ಎದುರಾಗಲಿದ್ದು ಸಾಧು-ಸಂತರಿಗೆ ಸಮಸ್ಯೆಯಾಗಲಿದೆ. 2-3 ದೊಡ್ಡ ದೊಡ್ಡ ತಲೆಗಳು ಉರುಳಲಿದೆ, ರಾಜ್ಯದಲ್ಲಿ ಏಕ ಪಕ್ಷ ಅಧಿಕಾರಕ್ಕೆ ಬರಲಿದೆ, ಸಮ್ಮಿಶ್ರ ಸರಕಾರ ಅಧಿಕಾರ ಮಾಡಲ್ಲ, ಸಂಕ್ರಾಂತಿ , ಯುಗಾದಿ ಬಳಿಕ ಕಳೆದ ಬಾರಿಯಂತೆ ಮಳೆಯಾಗಲಿದೆ ಎಂದವರು ಭವಿಷ್ಯ ನುಡಿದಿದ್ದಾರೆ.

LEAVE A REPLY

Please enter your comment!
Please enter your name here