ಬೆಂಗಳೂರು ಅಡಿಕೆ ಬೆಳೆಗಾರರಿಗೆ ಪ್ರೀತ್ಸಾಹ ನೀಡಬಾರದು ಎಂಬ ತಮ್ಮ ಹೇಳಿಕೆಯನ್ನು ಗೃಹಸಚಿವ ಅರಗ ಜ್ಞಾನೇಂದ್ರ ಸಮರ್ಥಿಸಿ ಕೊಂಡಿದ್ದಾರೆ.
ಸರಕಾರ ಪ್ರೋತ್ಸಾಹ ಕೊಟ್ಟು ಬಯಲು ಸೀಮೆಯಲ್ಲಿ ಹೊಸ ಅಡಿಕೆ ತೋಟ ಮಾಡವ ಅವಶ್ಯಕತೆ ಇಲ್ಲ.ಕರಾವಳಿ ,ಮಳೆನಾಡಿನಲ್ಲಿ ಪರಂಪರಾಗತವಾಗಿ ಅಡಿಕೆ ಬೆಳೆಯುತ್ತೇವೆ. ವರ್ಷಕ್ಕೆ 1 ಕೋಟಿ ಅಡಿಕೆ ಸಸಿ ಮಾರಾಟವಾಗುತ್ತಿದೆ. ಆಂದ್ರ ಪ್ರದೇಶದ 2 ಸಾವಿರ ಎಕ್ರೆ ಪ್ರದೇಶದಲ್ಲಿ ಈಗಾಗಲೇ ಫಸಲು ಬರಲು ಆರಂಭವಾಗಿದೆ.ಹೀಗಾದರೆ ಅಡಿಕೆ ದರ ಎಷ್ಟು ದಿನ ಇರಬಹುದು? ಅಡಿಕೆಗೆ ಬಂದ ರೇಟ್ ಅಡಿಕೆಗೆ ಶಾಪವಾಗಿದೆ. ಸರಕಾರದ ಬೆಂಬಲ, ಪ್ರೋತ್ಸಾಹದಿಂದ ಹೊಸ ತೋಟ ಆಗುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.