ಮಂಗಳೂರು: ಕಾಂತಾರ ಸಿನಿಮಾದ ಬಳಿಕ ಕರಾವಳಿಯ ದೈವಾರಾಧನೆ ದೇಶದ ಗಮನ ಸೆಳೆದಿದ್ದು ಎಲ್ಲರಿಗೂ ತಿಳಿದ ವಿಷಯ.ಸ್ಯಾಂಡಲ್ ವುಡ್ ಕಲಾವಿದರು ಕೂಡ ದೈವಾರಾಧನೆ ಬಗ್ಗೆ ಆಸಕ್ತಿ ಹೊಂದಿದ್ದು ಕರಾವಳಿಯಲ್ಲಿ ನಡೆಯುವ ದೈವಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗೆ ದೊಡ್ಮನೆ ಹುಡುಗ ಡಾ.ಶಿವರಾಜ್ ಕುಮಾರ್ ವೇದಾ ಚಿತ್ರದ ಪ್ರೊಮೋಷನ್ ಗೆ ಮಂಗಳೂರಿಗೆ ಬಂದಿದ್ದ ವೇಳೆ ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ರಾಜಕಾರಿಣಿ , ನಟಿ ಶೃತಿ ಕೂಡ ದೈವಾರಾಧನೆ ಬಗ್ಗೆ ಒಲವು ತೋರಿಸಿದ್ದು ತಮ್ಮ ಮಗಳ ಜೊತೆ ಬಂದು ಮಂಗಳೂರಿನಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿದ್ದಾರೆ.ಶೃತಿ ಅಭಿನಯದ “13 ” ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು ಕರಾವಳಿಯ ನೈಜ ಘಟನೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ.