ಶ್ರೀರಾಮುಲು ಆಪ್ತರ ಮನೆ ಕಛೇರಿಗೆ ಐಟಿ ದಾಳಿ

ಬಳ್ಳಾರಿ : ತೆರಿಗೆ ವಂಚನೆ ಆರೋಪ ಹಿನ್ನಲೆಯಲ್ಲಿ ಸಚಿವ ಬಿ ಶ್ರೀರಾಮುಲು ಮತ್ತವರ ಅಳಿಯ ಮಾಜಿ ಶಾಸಕ ಟಿ ಎಚ್ ಸುರೇಶ್‌ ಬಾಬು ಒಡೆತನದ ಫ್ಯಾಕ್ಟರಿ ನಡೆಸುತ್ತಿದ್ದ ಸಚಿವರ ಆಪ್ತ ವ್ಯಕ್ತಿಯ ಮನೆ ಹಾಗೂ ಕಛೇರಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ.

ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಮುಂಬರುವ ವಿಧಾನ ಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವಂತೆಯೇ ಈ ದಾಳಿ ನಡೆದಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಇತ್ತೀಚೆಗೆ ಸರಕಾರ ಸಿಬಿಐ ಗೆ ಜನಾರ್ಧನ ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಲು ಅನುಮತಿ ನೀಡಿತ್ತು.

LEAVE A REPLY

Please enter your comment!
Please enter your name here