ಬೆಂಗಳೂರು: ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಆರೋಪದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಇತರ ನಾಲ್ವರ ವಿರುದ್ಧ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ತನ್ನ ಕಾರಿನ ಬಾನೆಟ್ ನಲ್ಲಿ ನೇತಾಡುತ್ತಿದ್ದ ದರ್ಶನ್ ಎಂಬ ಯುವಕನನ್ನು ಸುಮಾರು ಒಂದು ಕಿ.ಮೀ ಎಳೆದೊಯ್ದ ಖತರ್ನಾಕ್ ಚಾಲಕಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಅಪಘಾತವೆಸಗಿ ಬಳಿಕ ಸ್ಥಳದಿಂದ ಪರಾರಿಯಾಗಲೆತ್ನಿಸಿದ ಚಾಲಕಿಯೊಬ್ಬರು, ತಮ್ಮನ್ನು ತಡೆಯಲು ಬಂದ ಯುವಕನಿಗೆ ಕಾರು ಗುದ್ದಿಸಿ ಬಾನೆಟ್ ಮೇಲೆಯೇ ಕೆಲದೂರ ಹೊತ್ತೊಯ್ದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಮುಖ್ಯರಸ್ತೆಯ ಜಂಕ್ಷನ್ ಬಳಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗುತ್ತಿದೆ.