ಡಿಕ್ಕಿ ಹೊಡೆದು ಬೈಕ್‌ ನ್ನು 10 ಕಿ.ಮೀ ಎಳೆದೊಯ್ದ ಕಾರು

ಹೈದರಾಬಾದ್‌ : ಕಾರೊಂದು ಸುಮಾರು 10 ಕಿ.ಮೀ. ದೂರದವರೆಗೆ ಬೈಕೊಂದನ್ನು ಎಳೆದೊಯ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಘಟನೆ ತೆಲಂಗಾಣದ ಮುತ್ಯಂಪೇಟೆಯಲ್ಲಿ ನಡೆದಿದೆ. ಮಾನಕೊಂಡೂರು ನಿವಾಸಿಗಳಾದ ಅಬ್ದುಲ್‌ ಲತೀಫ್‌ ಮತ್ತು ಮಹಮ್ಮದ್‌ ಹಮೀದ್‌ ಖಾನ್‌ ಮೃತಪಟ್ಟವರು. ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಅಡಿಯಲ್ಲಿ ಬೈಕ್‌ ಸಿಲುಕಿತ್ತು. ಕಾರು ಚಾಲಕ ಸಾಯಿ ವರ್ಧನ್‌ ಎಂಬಾತ ಕಾರು ನಿಲ್ಲಿಸದೆ ಸುಮಾರು 10 ಕಿ.ಮೀ ದೂರ ಬೈಕನ್ನು

ಎಳೆದುಕೊಂಡು ಹೋದ ಪರಿಣಾಮ ಹಮೀದ್‌ ಖಾನ್‌ ಮೃತಪಟ್ಟಿದ್ದು, ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಹಿಂಬದಿ ಸವಾರ ಲತೀಫ್‌ ಸಾವನ್ನಪ್ಪಿದ್ದ.ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದು,ಕಾರು ಚಾಲಕನನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here