ವ್ಯಕ್ತಿಗಳಿಬ್ಬರನ್ನು ಜೀವಂತವಾಗಿ ದಹನ ಮಾಡಿದ ದುಷ್ಕರ್ಮಿಗಳು

ಹರಿಯಾಣ : ದೇಶದ ರಾಜಧಾನಿಯಿಂದ 100 ಕಿಮೀ. ದೂರದಲ್ಲಿರುವ ಮೇವಾತ್‌ ನಲ್ಲಿ ಗೋವಿನ ಹೆಸರಿನಲ್ಲಿ ಹತ್ಯೆ ನಡೆದಿದೆ.

ರಾಜಸ್ಥಾನ-ಹರಿಯಾಣ ಗಡಿ ಭಾಗದಲ್ಲಿ ಇಬ್ಬರು ವ್ಯಕ್ತಿಗನ್ನು ಗುಂಪೊಂದು ಅಪಹರಿಸಿ ಬಳಿಕ ಅವರಿಬ್ಬರು ತಮ್ಮ ಕಾರಿನೊಳಗಿದ್ದ ವೇಳೆ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಮೃತರನ್ನು ರಾಜಸ್ಥಾನದ ಭರತ್‌ ಪುರ ಜಿಲ್ಲೆಯ ಘಾಟ್ಮಿಕಾ ಗ್ರಾಮದ ನಿವಾಸಿಗಳಾದ ಜುನೈದ್‌ ಮತ್ತು ನಾಸಿರ್‌ ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪಿಗಳಾದ ಲೋಕೇಶ್‌ , ರಿಂಕು ಸೈನಿ, ಶ್ರೀಕಾಂತ್‌ ಮತ್ತು ಮೋನು ಮನೇಸರ್‌ ,ವಿರುದ್ದ ಕೇಸು ದಾಖಲಾಗಿದೆ. ಇವರೆಲ್ಲರೂ ಬಜರಂಗದಳದ ಸದಸ್ಯರು ಎನ್ನಲಾಗಿದೆ.

LEAVE A REPLY

Please enter your comment!
Please enter your name here