ಚಿಂಚೋಳಿಯಿಂದ ಕಳವಾಗಿದ್ದ ಬಸ್ಸು ಭೂ ಕೈಲಾಸದಲ್ಲಿ ಪತ್ತೆ

ಕಲಬುರಗಿ: ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಿಂದ ಕಳುವಾಗಿದ್ದ ಕೆಆರ್​ಟಿಸಿ ಸೇರಿದ್ದ ಬಸ್ಸನ್ನು‌  ಘಟನೆ ನಡೆದ ಹದಿಮೂರು ಗಂಟೆಯಲ್ಲಿ ಚಿಂಚೋಳಿ ಪೊಲೀಸರು ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂಕೈಲಾಸ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆ.  ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ‌ಸಂಸ್ಥೆಗೆ ಸೇರಿದ ಬೀದರ್ ಬಸ್ ಡಿಪೋ 2ಕ್ಕೆ ಸೇರಿದ ಸರ್ಕಾರಿ ಬಸ್ಸನ್ನು ತಂಡವೊಂದು ಸೋಮವಾರ ಬೆಳಗಿನ ಜಾವ ಕದ್ದು ಕೊಂಡು ಹೋದ  ಕೃತ್ಯದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಎರಡು ತಂಡಗಳನ್ನು ರಚಿಸಿ ಬಸ್ಸಿನ ಪತ್ತೆಗೆ ಮುಂದಾದ ಪೊಲೀಸರು ಬಸ್ಸನ್ನು ಪತ್ತೆ ಹಚ್ಚಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here