ಕರ್ಲಾನ್ ಕಾರ್ಖಾನೆಗೆ ಬೆಂಕಿ

ಮಂಗಳೂರು: ಕರ್ಲಾನ್ ಕಾರ್ಖಾನೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಇರುವ ಕರ್ಲಾನ್ ಕಾರ್ಖಾನೆಗೆ ಇದ್ದಕ್ಕಿಂದತೆ ಬೆಂಕಿ ತಗುಲಿದೆ. ಬೆಂಕಿ ಬೀಳುತ್ತಿದ್ದಂತೆ ಕಾರ್ಮಿಕರೆಲ್ಲರೂ ಹೊರ ಬಂದಿದ್ದಾರೆ. ಹೈಟೆನ್ಶನ್ ವಯರ್ ತುಂಡಾಗಿ ಕಾರ್ಖಾನೆ ಮೇಲೆ‌ ಬಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಕರ್ಲಾನ್ ಕಾರ್ಖಾನೆ ಅಕ್ಕ-ಪಕ್ಕದಲ್ಲಿ ಆಯಿಲ್ ಮುಂತಾದ ಕಾರ್ಖಾನೆಗಳಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ 

LEAVE A REPLY

Please enter your comment!
Please enter your name here