ಪ್ರೇಮಕ್ಕೆ ತಿರುಗಿದ ಪರಿಚಯ- ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಕೈ ಬಿಟ್ಟು ವಂಚಿಸಿರುವುದಾಗಿ ಆರೋಪಿಸಿ ಮಂಗಳೂರು ನಗರದ ಸಂತ ಪಾಲ್ ಚರ್ಚ್ ನ ಧರ್ಮಗುರು ನೋಯಲ್ ಕರ್ಕಡ ವಿರುದ್ಧ ಉಡುಪಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಆರೋಪಿಸಿದ್ದು ಬಲ್ಮಠದ ಶಾಂತಿ ಕೆಥೆಡ್ರಲ್ ಚರ್ಚ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.


2021 ರಲ್ಲಿ ನೋಯಲ್ ಕರ್ಕಡ ಅವರ ಪರಿಚಯವಾಗಿದ್ದು ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಬಳಸಿಕೊಂಡು, ಕಳಸ, ಕಾಸರಗೋಡು, ಸುತ್ತಾಡಿಸಿ ಮಂಗಳೂರಿನ ಕೊಟ್ಟಾರದಲ್ಲಿರುವ ಮನೆಯೊಂದರಲ್ಲಿ ನನ್ನನ್ನಿರಿಸಿ ದೈಹಿಕ ಸಂಪರ್ಕ ಮಾಡಿ 2022ರ ಫೆಬ್ರವರಿ ನಂತರ ದೂರ ಮಾಡಿದ್ದಾರೆ. ನ್ಯಾಯ ಕೇಳಿದಾಗ ಜೀವ ಬೆದರಿಕೆ ಹಾಕಿ, ಹಲ್ಲೆ ಮಾಡಿ, ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲುವುದಾಗಿ ಹೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.   ವಾಟ್ಸ್ ಆಪ್ ಚಾಟ್, ವಿಡಿಯೋಗಳನ್ನು ದಾಖಲೆಯಾಗಿಟ್ಟು ಒಡನಾಡಿ ಸಂಸ್ಥೆ ನೆರವು ಪಡೆದು ಪೊಲೀಸರಿಗೆ ದೂರು ನೀಡುವುದಾಗಿ ಮಹಿಳೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here