ಕ್ರೀಡಾ ಸ್ಪೂರ್ತಿ ಮರೆತ ಕ್ರಿಕೆಟ್ ದಿಗ್ಗಜರು

ಮಂಗಳೂರು (ಬೆಂಗಳೂರು): ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯ ಮುಕ್ತಾಯದ ನಂತರ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಕೈ ಕುಲುಕಲಿಲ್ಲ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಡೆಲ್ಲಿ ವಿರುದ್ಧ ಶನಿವಾರ ಆರ್‌ಸಿಬಿ 23 ರನ್ನುಗಳಿಂದ ಗೆಲುವು ಸಾಧಿಸಲು ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಕೆಆರ್ ಹಾಗೂ ಲಕ್ನೋ ತಂಡದ ವಿರುದ್ಧ ಸೋತಿದ್ದ. ಆರ್‌ಸಿಬಿ ಈ ಪಂದ್ಯದಲ್ಲಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು. ಪಂದ್ಯ ಮುಗಿದ ನಂತರ ಎರಡು ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸಾಲಾಗಿ ನಿಂತು ಕ್ರೀಡಾ ಸ್ಪೂರ್ತಿ ಪ್ರದರ್ಶಿಸಲು ಕೈ ಕುಲುಕಿದ್ದಾರೆ. ಆದರೆ ಕೊಹ್ಲಿ ಹಾಗೂ ಗಂಗೂಲಿ ಕೈ ಕುಲುಕದೆ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here