ಮೆಹೆಂದಿ ಶಾಸ್ತ್ರದ ದಿನ ನಾಪತ್ತೆಯದ ವರ – ಬಳ್ಳಾರಿಯಲ್ಲಿರುವುದಾಗಿ ತಂಗಿಗೆ ಸಂದೇಶ

ಮಂಗಳೂರು : ಮೆಹೆಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗ ಬಳ್ಳಾರಿಯಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ವರ್ಕಾಡಿ ದೇವಂದಪಡ್ಪು ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿರಣ್ ಶೆಟ್ಟಿ ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದರು.
ಮೇ ನಾಲ್ಕರಂದು ಮಧ್ಯಾಹ್ನ ಕಿಶನ್ ಶೆಟ್ಟಿ ತಂಗಿಗೆ ಮೊಬೈಲ್ ಸಂದೇಶ ಕಳುಹಿಸಿ ತಾನು ಬಳ್ಳಾರಿಯಲ್ಲಿರುವ ಬಗ್ಗೆ ತಿಳಿಸಿ ಇನ್ನೆಂದೂ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಸ್ಕೂಟರ್ ಮೆಲ್ಕಾರ್ ಆರ್ಟಿಓ ಕಛೇರಿ ಮುಂದೆ ಪಾರ್ಕ್ ಮಾಡಿರುವುದಾಗಿ ಹೇಳಿದ್ದಾರೆ. ತಂಗಿ ಸಹೋದರನನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದು ಕಿರಣ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಐತಪ್ಪ ಶೆಟ್ಟಿ ಕೊಣಾಜೆ ಠಾಣೆಗೆ ಕರೆ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here