ನಾಗಸ್ವರ ವಾದಕ ಜಲೀಲ್ ಸಾಹೇಬ್ ಹೃದಯಾಘಾತದಿಂದ ನಿಧನ

ಮಂಗಳೂರು (ಕಾಪು): ಕಾಪು ಪರಿಸರದ ಖ್ಯಾತ ನಾಗಸ್ವರ ವಾದಕ, ಹತ್ತಾರು ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದ ಕೊಪ್ಪಲಂಗಡಿ ನಿವಾಸಿ ಜಲೀಲ್ ಸಾಹೇಬ್ ನ.13ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಾಪು ಪರಿಸರ ಮಾತ್ರವಲ್ಲದೆ ಹತ್ತಾರು ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ನಾಗಸ್ವರ ವಾದ್ಯ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಜಲೀಲ್ ಸಾಹೇಬರಿಗೆ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದರು. ಕಾಪು ಸಾವಿರ ಸೀಮೆಯ ದೇವರು ದೈವಗಳಿಗೆ ನಾಗಸ್ವರ ನುಡಿಸುತ್ತಿದ್ದ ಸಾಮರಸ್ಯದ ಕೊಂಡಿಯೊಂದು ಕಳಚಿ ಬಿದ್ದಿದೆ.

LEAVE A REPLY

Please enter your comment!
Please enter your name here