ಸಲ್ಮಾನ್ ಖಾನ್ ಹತ್ಯೆಯೊಂದೇ ನನ್ನ ಗುರಿ – ಲಾ. ಬಿಷ್ಣೋಯ್

ಮಂಗಳೂರು: ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಸಮರಕ್ಕಿಳಿದಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್, ಜೈಲಿನಿಂದ ಮತ್ತೊಮ್ಮೆ ಸಲ್ಮಾನ್ ಖಾನ್ ನನ್ನು  ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.  ಈಗಾಗಲೇ ಸಲ್ಮಾನ್ ಖಾನ್ ನನ್ನು ಕೊಲ್ಲಲು ಬಿಷ್ಣೋಯ್ ಹಾಗೂ ಆತನ ತಂಡ ಹಲವು ಬಾರಿ ವಿಫಲ ಪ್ರಯತ್ನ ಮಾಡಿತ್ತು. ಸಲ್ಮಾನ್ ಖಾನ್ ಕೊಲೆಯತ್ನ ಸಂಬಂಧವಾಗಿ ಅನೇಕರ ಬಂಧನ ಕೂಡ ನಡೆದಿದೆ. ಈಗ ಜೈಲಿನಲ್ಲಿರುವ ಬಿಷ್ಣೋಯ್  ಮತ್ತೊಮ್ಮೆ ಸಲ್ಮಾನ್ ಖಾನ್ ಅವರನ್ನು ಕೊಳ್ಳುವ ಬೆದರಿಕೆ ಹಾಕಿದ್ದಾನೆ. 

1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್​ಗಾಗಿ ಸಲ್ಮಾನ್ ಖಾನ್ ​ ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದ ವೇಳೆ ಸ್ನೇಹಿತರೊಂದಿಗೆ ಕೃಷ್ಣ ಮೃಗವೊಂದನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯ ಪ್ರಕೃತಿ ಆರಾಧಕರಾಗಿದ್ದು, ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರನ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿಯೇ ಕೃಷ್ಣಮೃಗ ಹತ್ಯೆ ಮಾಡಿದ ಸಲ್ಮಾನ್ ಖಾನ್ ನನ್ನು ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here