ಪ್ರಧಾನಿ ನರೇಂದ್ರ ಮೋದಿ @ಬಂಡೀಪುರ 

ಮಂಗಳೂರು : ಹುಲಿ ಯೋಜನೆಯ 50ನೇ ವರ್ಷ ಆಚರಣೆಯಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಬಂಡಿಪುರ ರಾಷ್ಟ್ರೀಯ ಉದ್ಯಾನವನ ತಲುಪಿದ್ದಾರೆ.

ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ ಮೇಲುಕಾಮನ ಹಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ ಭಾರಿ ಭದ್ರತೆಯೊಂದಿಗೆ ಹೆಲಿಫ್ಯಾಡ್ ನಿಂದ ರಸ್ತೆ ಮೂಲಕ ಬಂಡಿಪುರಕ್ಕೆ ಬಂದಿದ್ದಾರೆ. ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ, ಅಂಚೆ ಚೀಟಿ ಬಿಡುಗಡೆ ಮಾಡಲಿರುವ ಪ್ರಧಾನಿ ಬಂಡಿಪುರದಲ್ಲಿ ಎರಡು ತಾಸು ಸಫಾರಿ ನಡೆಸಲಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here