ಕುಸ್ತಿಪಟುಗಳ ಪ್ರತಿಭಟನೆ- ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದೆ ಓಡಿ ಹೋದ ಸಚಿವೆ ಮೀನಾಕ್ಷಿ ಲೇಖಿ

ಮಂಗಳೂರು: ಪ್ರತಿಭಟನಾ ನಿರತ ಕುಸ್ತಿಪಟುಗಳ ಕುರಿತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ಓಡಿ ಹೋಗಿರೋದು ಪ್ರತಿಪಕ್ಷಗಳ ಟೀಕೆಗೆ ಒಳಗಾಗಿದೆ.

ಪ್ರತಿಭಟನಾ ನಿರತ ಕುಸ್ತಿಪಟುಗಳ ಕುರಿತು ನೀವು ಏನು ಹೇಳುತ್ತೀರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಲೇಖಿ ಅವರು ಕಾನೂನು ಪ್ರತಿಕ್ರಿಯೆ ನೀಡುತ್ತಿದೆ ಎಂದಷ್ಟೇ ಹೇಳಿ ಅಲ್ಲಿಂದ ತರಾತುರಿಯಲ್ಲಿ ಓಡುವ ದೃಶ್ಯ ವೈರಲಾಗಿದೆ.

ವೈರಲ್ ಆದ ವಿಡಿಯೋ ಕ್ಲಿಪ್ ನ್ನು ಹಂಚಿಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್, ಪ್ರತಿಭಟನಾ ನಿರತ ಕುಸ್ತಿಪಟುಗಳ ಬಗ್ಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದೆ. ಈ ನಡುವೆ ಕುಸ್ತಿಪಟುಗಳ ಪ್ರತಿಭಟನೆ ಕುರಿತಂತೆ ಚರ್ಚೆ ನಡೆಸಲು ಜೂನ್‌.1ರಂದು ಮಹಾ ಪಂಚಾಯತ್‌ ಗೆ ರೈತ ನಾಯಕ ನರೇಶ್‌ ಟಕಾಯತ್‌ ಕರೆ ನೀಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here