ಹಸಮಣೆ ಏರಬೇಕಿದ್ದ ವರ ನಾಪತ್ತೆ

ಮಂಗಳೂರು: ಇಂದು (ಜೂನ್.1) ವಿವಾಹವಾಗಬೇಕಿದ್ದ ವರನೊಬ್ಬ ನಾಪತ್ತೆಯಾಗಿರುವ ಘಟನೆ ಕೊಣಾಜೆ  ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿಯಲ್ಲಿ ನಡೆದಿದೆ. ವರ್ಕಾಡ, ದೇವಂದಪಡ್ಪು ನಿವಾಸಿ ಉದ್ಯಮಿ ಐತ್ತಪ್ಪ ಶೆಟ್ಟಿಯವರ ಮಗ ಕಿಶನ್‌ ಶೆಟ್ಟಿ ನಾಪತ್ತೆಯಾದ ವರ ಎಂದು ಗುರುತಿಸಲಾಗಿದೆ.

ಕಿಶನ್‌ ಶೆಟ್ಟಿ ಮಂಗಳೂರು ಜಪ್ಪಿನಮೊಗುರು ನಿವಾಸಿ ಉಪನ್ಯಾಸಕಿಯೊಂದಿಗೆ ಜೂನ್.1 ವಿವಾಹ ನಡೆಬೇಕಿತ್ತು. ಆದರೆ ಮೇ.31ರಂದು ಹಣ್ಣು ಖರೀದಿಸಲೆಂದು ಹೊರಗೆ ಹೋದಾತ ಏಕಾಏಕಿ ನಾಪತ್ತೆಯಾಗಿದ್ದು, ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ವಧುವಿಗೆ ಮೆಹಂದಿ ಶಾಸ್ತ್ರ ಮುಗಿದಿದ್ದು, ಮೇ.31ರ ಸಂಜೆ ವರನ  ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆಬೇಕಿತ್ತು. ಆದರೆ ವರ ನಾಪತ್ತೆಯಾಗಿರುವುದು ಎರಡು ಕುಟುಂಬವನ್ನು ಚಿಂತೆ ಗೀಡು ಮಾಡಿದೆ. ಈ ಕುರಿತು ವರನ ತಂದೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here