ಒಡಿಶಾ ರೈಲು ದುರಂತದ ಬಗ್ಗೆ ಕಟೀಲ್ ಟ್ವೀಟ್-ಬದಲಾದ ಫೋಟೋ- ಟೀಕೆಗಳ ಸುರಿಮಳೆ

ಮಂಗಳೂರು: ಒಡಿಶಾ ರೈಲು ದುರಂತದ ಬಗ್ಗೆ ಟ್ವೀಟ್ ಮಾಡಲು ಹೋಗಿ ನಳಿನ್ ಕುಮಾರ್ ಕಟೀಲ್ ಪೇಚಿಗೀಡಾಗಿದ್ದಾರೆ.

ಟ್ವೀಟ್ ನಲ್ಲಿ ರೈಲು ಬೋಗಿಗಳು ಹೊತ್ತಿ ಉರಿಯುವ ಯಾವುದೋ ಫೋಟೋ ಹಾಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಅನೇಕರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವಿಟರ್ ನಲ್ಲಿ ಹಾಕಿದ್ದ ಫೋಟೋ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಒಡಿಶಾದಲ್ಲಿ ನಡೆದ ರೈಲುಗಳ ಅಪಘಾತದ ಫೋಟೋವಲ್ಲ ಬದಲಾಗಿ ವಿದೇಶದಲ್ಲಿ ನಡೆದಿದ್ದಂತ ರೈಲುಗಳ ಮುಖಾಮುಖಿ ಡಿಕ್ಕಿಯ ಫೋಟೋ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಕೊನೆಗೂ ಎಚ್ಚೆತ್ತುಕೊಂಡ ಕಟೀಲ್ ಫೋಟೋ ಬದಲಾಯಿಸಿ ಟೀಕೆಗೆ ಇತಿಶ್ರೀ ಹಾಡಿದ್ದಾರೆ.

LEAVE A REPLY

Please enter your comment!
Please enter your name here