ಮೂರನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಮಂಗಳೂರು: ಬಿಸಿ ರೋಡ್ ಕೈಕಂಬದ ವಸತಿ ನಿಲಯದ ಮೂರು ಮಹಡಿ ಕಟ್ಟಡದಲ್ಲಿ ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ಟೆಕ್ನಿಷಿಯನ್ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಜೂನ್ 30 ರಂದು ನಡೆದಿದೆ.

ಕೊಯ್ಲ ಗ್ರಾಮದ ಗೋವಿಂದ ಬೆಟ್ಟು ನಿವಾಸಿ ಯತೀಶ್ ಗಾಣಿಗ (30) ಮೃತಪಟ್ಟವರು. ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದ ಯತೀಶ್‌ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಮಿಲಾದುನ್ನಬಿ ಸಂಘದ ನುಸ್ರತ್ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಳೆದ ಹತ್ತು ವರ್ಷಗಳಿಂದ ಟಿವಿ ರಿಪೇರಿ, ಡಿಶ್ ಅಳವಡಿಕೆ‌, ಎಸಿ ಮೆಕಾನಿಕ್ ಆಗಿ ವೃತ್ತಿ ಮಾಡುತ್ತಿದ್ದ ಯತೀಶ್, ತಂದೆ‌, ತಾಯಿ, ಸಹೋದರ, ಸಹೋದರಿಯನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here