ಮಹಾರಾಷ್ಟ್ರ: ಬ್ರೇಕ್‌ ವೈಫಲ್ಯದಿಂದ ಹೋಟೆಲ್‌ ಗೆ ನುಗ್ಗಿದ ಟ್ರಕ್-15 ಸಾವು, 20 ಮಂದಿಗೆ ಗಾಯ

ಮಂಗಳೂರು: ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಜು.4 ರಂದು ಟ್ರಕ್ಕೊಂದು ಹೆದ್ದಾರಿ ಪಕ್ಕದ ಹೋಟೆಲ್ ಗೆ ನುಗ್ಗಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆ 11:00 ಸುಮಾರಿಗೆ ಮುಂಬೈ ಆಗ್ರ ಹೆದ್ದಾರಿಯಲ್ಲಿರುವ ಶಿರಪುರ ತಾಲೂಕಿನ ಪಳಾಸನೇರ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಬ್ರೇಕ್ ವೈಫಲ್ಯ ದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಿಯಂತ್ರಣ ಕಳೆದುಕೊಂಡಿದ್ದ ಟ್ರಕ್ ಹೋಟೆಲ್ ಗೆ ನುಗ್ಗುವ ಮುನ್ನ ಎರಡು ಬೈಕು ಹಾಗೂ ಒಂದು ಕಾರು ಸೇರಿದಂತೆ ಇನ್ನೊಂದು ಕಂಟೇನರ್ ಟ್ರಕ್‌ ನ ಹಿಂಭಾಗಕ್ಕೆ ಡಿಕ್ಕಿಯಾಗಿತ್ತು. ಹೆದ್ದಾರಿಯಲ್ಲಿನ ಬಸ್ ನಿಲ್ದಾಣದ ಸಮೀಪದ ಹೋಟೆಲ್ ಗೆ ಡಿಕ್ಕಿ ಹೊಡೆದ ಬಳಿಕ ಟ್ರಕ್ ಪಲ್ಟಿಯಾಗಿದೆ. ಕನಿಷ್ಠ 15 ಜನರು ಮೃತಪಟ್ಟಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಶಿರಪುರ ಮತ್ತು ಧುಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here