ಎರಡು ಕಾರುಗಳ ನಡುವೆ ಡಿಕ್ಕಿ- ಐದು ಮಂದಿಗೆ ಗಾಯ

ಮಂಗಳೂರು : ಎರಡು ಕಾರುಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಐವರು ಗಾಯಗೊಂಡ ಘಟನೆ ಬಿಸಿ ರೋಡು ಬೆಳ್ತಂಗಡಿ ರಾಜ್ಯ ರಸ್ತೆಯ ಪರ್ಲ ಚರ್ಚು ಸಮೀಪ ಇಂದು ನಡೆದಿದೆ.

 

ಒಮ್ನಿ ಕಾರು ಮತ್ತು ಸೃಷ್ಟಿ ಕಾರು ಮಧ್ಯೆ ಈ ಅಪಘಾತ ಸಂಭವಿಸಿದ್ದು ಪರ್ಲ ಚರ್ಚೆಗೆ ಪೂಜೆಗೆಂದು ಬರುತ್ತಿದ್ದವರ ಒಮ್ನಿ ಕಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರು ಡಿಕ್ಕಿ ಆಗಿದೆ.
ಡಿಕ್ಕಿ ರಭಸಕ್ಕೆ ಒಮ್ನಿ ಕಾರನ್ನು ಸುಮಾರು ದೂರ ತಳ್ಳಿಕೊಂಡು ಹೋಗಿದ್ದಲ್ಲದೆ ಒಮ್ನಿ ಕಾರು ಉರುಳಿ ಬಿದ್ದಿದೆ. ಕಾರಿನೊಳಗಿದ್ದ ಪ್ರಯಾಣಿಕರನ್ನು ಹಿಂಬದಿಯ ಗಾಜು ಒಡೆದು ಹೊರಕ್ಕೆ ತೆಗೆಯಲಾಗಿದೆ.
ಒಮ್ನಿ ಕಾರಿನಲ್ಲಿದ್ದ ಮೂವರಿಗೆ ಮತ್ತು ಸ್ವಿಫ್ಟ್ ಕಾರು ಚಾಲಕನಿಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎರಡು ಕಾರುಗಳು ವಗ್ಗದಿಂದ ಬರುತ್ತಿದ್ದು ಪರ್ಲ ಚರ್ಚ್ ಬಳಿಗೆ ಬರುತ್ತಿದ್ದಂತೆ ಓಮ್ನಿ ಕಾರು ಚರ್ಚಿಗೆ ಹೋಗುವ ಉದ್ದೇಶದಿಂದ ತಿರುಗಿಸಿದ್ದು ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರು ಡಿಕ್ಕಿ
ಹೊಡೆದಿದೆ.

LEAVE A REPLY

Please enter your comment!
Please enter your name here