Home ಅನಾಚಾರ ಚಿತೆಯಲ್ಲಿದ್ದ ಯುವತಿಯ ಮೃತದೇಹದ ಮಾಂಸ ತಿಂದ ಕುಡುಕರು

ಚಿತೆಯಲ್ಲಿದ್ದ ಯುವತಿಯ ಮೃತದೇಹದ ಮಾಂಸ ತಿಂದ ಕುಡುಕರು

ಬಡಸಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಸಾಹಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ದಾಂಟುನಿ ಗ್ರಾಮದ ಸುಂದರ್ ಮೋಹನ್ ಸಿಂಗ್ (58) ಮತ್ತು ನರೇಂದ್ರ ಸಿಂಗ್ (25) ಎಂದು ಗುರುತಿಸಲಾದ ಇಬ್ಬರು ಕುಡುಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಸಾಹಿ ಗ್ರಾಮದ ಮಧುಸ್ಮಿತಾ ಸಿಂಗ್ (25) ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವೈದ್ಯರು ಶವವನ್ನು ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ರು. ಬಳಿಕ ಮಧುಸ್ಮಿತಾ ಅವರ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಲು ಶವವನ್ನು ಸ್ಮಶಾನಕ್ಕೆ ಕೊಂಡೊಯ್ದರು.

ಶವಸಂಸ್ಕಾರದ ವೇಳೆ ಅಲ್ಲೇ ಇದ್ದ ಇಬ್ಬರು ಕುಡುಕರು, ಅರ್ಧ ಸುಟ್ಟ ದೇಹದ ಒಂದು ಭಾಗವನ್ನು ತ್ವರಿತ ವಿಲೇವಾರಿಗಾಗಿ ಮೂರು ತುಂಡುಗಳಾಗಿ ಕತ್ತರಿಸಿದ್ದು, ತಮ್ಮ ಬಳಿ ಒಂದು ತುಂಡನ್ನು ಇಟ್ಟುಕೊಂಡಿದ್ದಾರೆ. ಈ ವೇಳೆ ಶವಕ್ಕೆ ಬೆಂಕಿ ಹಚ್ಚಲಾಗಿದೆ. ಮಾಂಸವನ್ನು ಏನು ಮಾಡುತ್ತೀರಿ ಎಂದು ಮೃತಳ ಕುಟುಂಬಸ್ಥರು ಪ್ರಶ್ನಿಸಿದಾಗ, ವಾಮಾಚಾರದ ಮಾತನಾಡಿದ್ದಾರೆ. ಬಳಿಕ ಅರ್ಧ ಸುಟ್ಟ ದೇಹವನ್ನು ತಿನ್ನಲು ಶುರು ಮಾಡಿದ್ದಾರೆ.

ಈ ಕೃತ್ಯದಿಂದ ಆಘಾತಗೊಂಡ ಮೃತಳ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕುಡುಕರಿಬ್ಬರಿಗೂ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿ ಶವದ ಮಾಂಸ ಸೇವಿಸಿದ್ದಾಗಿ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!