ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಮೃತ್ಯು

ಮಂಗಳೂರು : ನಗರದ ಕದ್ರಿ ಶಿವಭಾಗನಲ್ಲಿರುವ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಜುಲೈ 30ರಂದು ಬೆಳಿಗ್ಗೆ ನಡೆದಿದೆ.

ಮೂಲತ ಅಡ್ಡಿಯರ್ ನಿವಾಸಿಯಾಗಿದ್ದು ಪ್ರಸ್ತುತ ಕದ್ರಿ ಶಿವಭಾಗ ನಿವಾಸಿಯಾಗಿರುವ ಸಮಯ (21) ಮೃತಪಟ್ಟ ವಿದ್ಯಾರ್ಥಿ.

ರವಿವಾರ ಬೆಳಿಗ್ಗೆ ಶಿವಭಾಗ ಅಪಾರ್ಟ್ಮೆಂಟ್ ನ ತಮ್ಮ ಪ್ಲಾಟ್ ನ ಬಾಲ್ಕನಿಯಲ್ಲಿ ಸಮಯ ಓದುತ್ತಿದ್ದ ವೇಳೆ ಕಾರು ತೊಳೆಯಲು ನೆಲಮಹಡಿಗೆ ಬರುವಂತೆ ತಾಯಿ ಕರೆದಿದ್ದಾರೆ. ಓದು ನಿಲ್ಲಿಸಿ ವಾಶ್ ರೂಮಿಗೆ ಹೋಗಿ ಬಂದ ಸಮಯ್ ಬಾಲ್ಕನಿಂದಲೇ ಬಗ್ಗೆ ನೆಲಮಹಡಿಯಲ್ಲಿರುವ ತಾಯಿಯನ್ನು ಕರೆದು ಬಾಲ್ದಿ ತೆಗೆದುಕೊಂಡು ಹೋಗಿದ್ದೀರಾ ಎಂದು ಕೇಳಿದ್ದಾರೆ. ಈ ವೇಳೆ ಸಮಯ್ ಕಾಲು ಜಾರಿ 5ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಮಯ್ ತಂದೆ ಸಿವಿಲ್ ಇಂಜಿನಿಯರ್ ಆಗಿದ್ದು ತಾಯಿ ಗ್ರಹಿಣಿ ಯಾಗಿದ್ದಾರೆ. ದಂಪತಿಗಳ ಇಬ್ಬರು ಗಂಡು ಮಕ್ಕಳಲ್ಲಿ ಸಮಯ ಹಿರಿಯವನು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here