ಹಾಸಿಗೆ ಹಿಡಿದು ದಯನೀಯ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾಸಾಶನ – ಸಿಎಂ ಗೆ ಶಾಸಕ ರೈ ಮನವಿ

ಮಂಗಳೂರು: ವಿವಿಧ ಕಾರಣಗಳಿಂದ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿರುವಂತಹ ಮತ್ತು ಮನೆಯಲ್ಲಿಯೇ ಇದ್ದು ಹಾಸಿಗೆ ಹಿಡಿದಿರುವ ರೋಗಿಗಳಿಗೆ ಸರಕಾರ ಮಾಸಾಶನ ನೀಡಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದ ಅಶೋಕ್ ರೈ  ಇಂತಹ ರೋಗಿಗಳು ಅತ್ತ ಸಾವೂ ಇಲ್ಲದೆ, ಇತ್ತ ಬದುಕೂ ಇಲ್ಲದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ನೆರವಾಗುವ ನೆಲೆಯಲ್ಲಿ ಸರಕಾರ ಮಾಸಾಶನ ನೀಡಬೇಕಿದೆ ಎಂದು ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಇಂತಹ ರೋಗಿಗಳು ಬಡವರೇ ಆಗಿದ್ದು ಮಾನವೀಯತೆಯ ನೆಲೆಯಲ್ಲಿ ಅವರಿಗೆ ಬದುಕು ನಡೆಸಲು ಸಹಾಯ ಮಾಡಬೇಕಿದೆ. ಇದರಿಂದ ನಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ ಎಂದು ಸಿಎಂ ಬಳಿ ಹೇಳಿಕೊಂಡರು. ಶಾಸಕರ ಮಾತಿಗೆ ಬೇಸರಗೊಂಡ ಸಿಎಂ ಕೆಲವು ಕ್ಷಣ ಮೌನಕ್ಕೆ ಶರಣಾಗಿ ಬಳಿಕ ಈ ವಿಚಾರದ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವಿಚಾರವನ್ನು ಶಾಸಕರು ಅಧಿವೇಶನದಲ್ಲೂ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

 

 

LEAVE A REPLY

Please enter your comment!
Please enter your name here