ಎಟಿಎಂ ಗೆ ಜೆಸಿಬಿ ನುಗ್ಗಿಸಿ ಹಣ ಲೂಟಿಗೆ ಯತ್ನ – ಸೈರನ್ ಗೆ ಓಡಿ ಹೋದ ಕಳ್ಳರು

ಮಂಗಳೂರು : ಸುರತ್ಕಲ್ ನ ಸೌತ್ ಇಂಡಿಯನ್ ಬ್ಯಾಂಕ್ ನ ಪಕ್ಕದಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಣ ಲೂಟಿಗೆ ಪ್ರಯತ್ನಿಸಿ ವಿಫಲವಾದ ಘಟನೆ ಆಗಸ್ಟ್ ನಾಲ್ಕರಂದು ನಡೆದಿದೆ.

ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ಕಳ್ಳತನಕ್ಕೆ ಪ್ರಯತ್ನ ಮಾಡಲಾಗಿದೆ. ಇದೆ ವೇಳೆ ಸೈರನ್ ಮೊಳಗಿದ್ದು ಕಳ್ಳರು ಓಡಿಹೋಗಿದ್ದಾರೆ. ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಎಂದು ಕಳವಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು , ಡಿಸಿಪಿ ದಿನೇಶ್ ಕುಮಾರ್ ನೇತೃತ್ವದ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here