ಆಟಿದ ಕೂಟದಲ್ಲಿ ಮಹಿಳೆಯ ದೈವ ನರ್ತನ – ಸಾರ್ವಜನಿಕರ ಟೀಕೆಗೆ ಗುರಿಯಾದ ಮಹಿಳೆಯಿಂದ ಕ್ಷಮೆಯಾಚನೆ

ಮಂಗಳೂರು: ಆಟಿ ಕೂಟದ ಕಾರ್ಯಕ್ರಮವೊಂದರಲ್ಲಿ ದೈವ ಆವಾಹನೆ ರೀತಿ ಮಹಿಳೆ ನೃತ್ಯ ಮಾಡಿದ ಘಟನೆ ಮಂಗಳೂರು ನಗರದ ಯೆಯ್ಯಾಡಿ‌ ಎಂಬಲ್ಲಿ ನಡೆದಿದ್ದು, ಮಹಿಳೆಯರಿಬ್ಬರ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳೆಯರ ನಡೆಗೆ ದೈವಾರಾಧಕರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದರು.

ಖಾಸಗಿ ಸಭಾಂಗಣವೊಂದರಲ್ಲಿ ನಡೆದ ಆಟಿದ ಕೂಟ ಎಂಬ ಕಾರ್ಯಕ್ರಮದಲ್ಲಿ ತಾಸೆ, ವಾದ್ಯದ ಸದ್ದಿಗೆ ದೈವ ಆವಾಹನೆ ರೀತಿ ಇಬ್ಬರು ಮಹಿಳೆಯರು ಕುಣಿದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿ, ದೈವ ನರ್ತನಕ್ಕೆ ಅಪಚಾರ ಎಸಗಿದ್ದು, ಕ್ಷಮೆ ಕೋರುವಂತೆ ಆಗ್ರಹಿಸಿದ್ದರು.

ಇದೀಗ ದೈವದ ನರ್ತನ ಮಾಡಿದ ಮಹಿಳೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ತಪ್ಪು ಕಾಣಿಕೆ ಸಲ್ಲಿಸುವ ಮೂಲಕ ಕ್ಷಮೆಯಾಚಿಸಿದ್ದಾರೆ. ದಯಾನಂದ ಕತ್ತಲಸಾರ್ ಸಹಿತ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here