ಪತಿ-ಪತ್ನಿ ಜಗಳ – ಇಬ್ಬರು ಮಕ್ಕಳನ್ನು ಬಾವಿಗೆಸೆದು ಕೊಂದ ಪತಿ

ಮಂಗಳೂರು(ಮುಂಬೈ): ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಬಾವಿಗೆಸೆದು ಕೊಂದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಅಹ್ಮದ್‌ನಗರ ಜಿಲ್ಲೆಯ ಕಾರ್ಜಟ್‌ ಪ್ರದೇಶದ ಅಲ್ಸುಂಡೆ ಎಂಬಲ್ಲಿ ಆ.6ರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಆರೋಪಿ ಗೋಕುಲ್ ಕ್ಷಿರ್‌ಸಾಗರ್, ತನ್ನ ಎಂಟು ವರ್ಷದ ಪುತ್ರಿ ರುತುಜಾ ಹಾಗೂ ನಾಲ್ಕು ವರ್ಷದ ಪುತ್ರ ವೇದಾಂತ್‌‌ನನ್ನು ಹೊರಗಡೆ ಕರೆದುಕೊಂಡು ಬಂದಿದ್ದು, ಗ್ರಾಮದ ಬಾವಿಗೆ ಇಬ್ಬರೂ ಮಕ್ಕಳನ್ನು ಬಿಸಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here