ಕೆಎಸ್ಆರ್‌ಟಿಸಿ ವಾರಾಂತ್ಯ ಪ್ಯಾಕೇಜ್ ಪ್ರವಾಸ

ಮಂಗಳೂರು(ಬೆಂಗಳೂರು): ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೋಗ, ಸೋಮನಾಥಪುರ ಸೇರಿದಂತೆ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ವಾರಾಂತ್ಯ ಪ್ಯಾಕೇಜ್ ಪ್ರವಾಸ ಸೌಲಭ್ಯ ಪರಿಚಯಿಸಿದೆ. ಆಗಸ್ಟ್ 11ರಿಂದ ಈ ಪ್ಯಾಕೇಜ್ ಪ್ರವಾಸ ಆರಂಭವಾಗಲಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ, ಬೆಂಗಳೂರು-ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಸೋಮನಾಥಪುರ ಪ್ಯಾಕೇಜ್‌ಗೆ ವಯಸ್ಕರಿಗೆ ರೂ.450, 6 ರಿಂದ 12 ವರ್ಷದ ಮಕ್ಕಳಿಗೆ ರೂ.300 ದರ ನಿಗದಿಪಡಿಸಿದೆ. ಜೋಗ ಜಲಪಾತ ಪ್ರಾಕೇಜ್ ಟೂರ್‌ಗೆ ವಯಸ್ಕರಿಗೆ ರೂ.2,500 ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ ರೂ.2,300 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7760990287, 7760990988 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here