ಕೆಂಪು ಕಲ್ಲು ಹಾಸುವ ವಿಚಾರದಲ್ಲಿ ಹಲ್ಲೆ – ದೂರು ದಾಖಲು

ಮಂಗಳೂರು(ವಿಟ್ಲ): ಕೆಂಪು ಕಲ್ಲು ಹಾಸುವ ವಿಚಾರಕ್ಕೆ ಸಂಬಂಧ ಪಟ್ಟಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೆರುವಾಯಿ ನಿವಾಸಿ ಜೋಸೆಫ್‌ ವಿಟ್ಲ ಠಾಣೆಯಲ್ಲಿ ಸತೀಶ್‌ ಎಂಬವರ ವಿರುದ್ದ ದೂರು ದಾಖಲಿಸಿದ್ದಾರೆ.

ಜೋಸೆಫ್‌ ಎಂಬವರು ಪೆರುವಾಯಿಯ ಮುಕುಡಾಪು ಎಂಬಲ್ಲಿಗೆ ಲಾರಿಯಲ್ಲಿ ಕೆಂಪು ಕಲ್ಲು ಸಾಗಿಸಿರುವುದನ್ನು ಗಮನಿಸಿದ ಸತೀಶ್‌ ಜೋಸೆಫ್‌ ಗೆ ಸೇರಿದ ಕಾಂಪೌಂಡ್‌ ಒಳಗಡೆ ಬಂದು ನನ್ನನ್ನು ಬಿಟ್ಟು ಬೇರೆಯವರಿಂದ ಕಲ್ಲು ಹಾಕಿಸುತ್ತೀಯಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

 

LEAVE A REPLY

Please enter your comment!
Please enter your name here