ಬಿಜೆಪಿ ‘ಶಂಖನಾದ ಅಭಿಯಾನ’ದ ರಾಜ್ಯಮಟ್ಟದ ಸಭೆ

ಮಂಗಳೂರು(ಬೆಂಗಳೂರು): ಬಿಜೆಪಿ ‘ಶಂಖನಾದ ಅಭಿಯಾನ’ದ ಸಂಬಂಧ ರಾಜ್ಯಮಟ್ಟದ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಂದು ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಉದ್ಘಾಟಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು, ಗೋವಾ ರಾಜ್ಯ ವಕ್ತಾರ ಗಿರಿರಾಜ್ ಪೈ, ಶಂಖನಾದ ಅಭಿಯಾನದ ಪ್ರಭಾರಿ ವಿಕಾಸ್ ಪಾಂಡೆ, ಅಭಿಯಾನದ ರಾಜ್ಯ ಸಂಚಾಲಕ ರಾಘವೇಂದ್ರ ನಾಗೂರ, ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ನರೇಂದ್ರಮೂರ್ತಿ, ಐಟಿ ರಾಜ್ಯ ಸಂಚಾಲಕ ನಿತಿನ್ ರಾಜ್ ನಾಯ್ಕ್, ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಸದಸ್ಯ ಪ್ರಶಾಂತ್ ಜಾಧವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here