ಕಾರಿನ ಗಾಜು ಒಡೆದು 13 ಲಕ್ಷ ಕದ್ದು ಪರಾರಿಯಾದ ಕಳ್ಳರು – ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಕೈಚಳಕ

ಮಂಗಳೂರು (ಬೆಂಗಳೂರು): ಇಬ್ಬರು ವ್ಯಕ್ತಿಗಳು ಬಿಎಂಡಬ್ಲ್ಯು ಕಾರಿನ ಗಾಜು ಒಡೆದು 13.75 ಲಕ್ಷ ನಗದು ದೋಚಿರುವ ಘಟನೆ ಬೆಂಗಳೂರಿನ ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕಾರಿನಲ್ಲಿ ಇದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ. ಕಳ್ಳರು ಹಣ ಕದ್ದು ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹೆಜ್ಜೆ ಗುರುತು ಕಂಡು ಹಿಡಿಯುವುದರಲ್ಲಿ ನಿರತರಾಗಿದ್ದಾರೆ.

ಆನೇಕಲ್‌ ನಿವಾಸಿಯಾಗಿರುವ ಮೋಹನ್‌ ಬಾಬು ಎಂಬವರು ಜಮೀನು ನೋಂದಣಿಗಾಗಿ ಸ್ನೇಹಿತರ ಬಳಿ 5 ಲಕ್ಷ ಸಾಲ ಪಡೆದು ಒಟ್ಟು 13.75 ಲಕ್ಷ ರೂ. ಹಣದೊಂದಿಗೆ ಸಂಬಂಧಿ ರಮೇಶ್‌ ಎಂಬವರೊಂದಿಗೆ ಕಾರಿನಲ್ಲಿ ಸಬ್‌ ರಿಜಿಸ್ಟರ್‌ ಕಛೇರಿಗೆ ಬಂದಿದ್ದರು. ಅಲ್ಲಿಂದ ಹೊರಡುವುದಕ್ಕೆ ಮೊದಲಾಗಿ ಕಳ್ಳರು ಕೈಚಳಕ ತೋರಿಸಿ ಹಣದೊಂದಿಗೆ ಬೈಕ್‌ ನಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here