ಧಾರಾಕಾರ ಮಳೆ-ಸಶಸ್ತ್ರ ಮೀಸಲು ಪಡೆಯ ನಿಯಂತ್ರಣ ಕೊಠಡಿಗೆ ನೀರು-ಬಂದೂಕು, ಪೊಲೀಸ್ ಸಿಬ್ಬಂದಿ ದಾಖಲೆ ನೀರುಪಾಲು

ಮಂಗಳೂರು(ಬೆಂಗಳೂರು): ರಾಜಧಾನಿ ಬೆಂಗಳೂರಿನಲ್ಲಿ ನ.8ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಉಲ್ಲಾಳ ಉಪನಗರದ ನಗರ ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ನಿಯಂತ್ರಣ ಕೊಠಡಿಗೆ ನೀರು ನುಗ್ಗಿದ ಪರಿಣಾಮ ಪಿಸ್ತೂಲುಗಳಿಗೆ ಹಾನಿಯಾಗಿದ್ದು ದಾಖಲೆಗಳು ನೀರುಪಾಲಾಗಿವೆ.

ಏಕಾಏಕಿ ಮಳೆಯ ನೀರು ನುಗ್ಗಿದ ಪರಿಣಾಮ ನಿಯಂತ್ರಣ ಕೊಠಡಿಯಲ್ಲಿದ್ದ ನೂರಾರು ಬಂದೂಕುಗಳು, ಪೊಲೀಸ್ ಭದ್ರತಾ ಸಿಬ್ಬಂದಿಯ ದಾಖಲೆ ಪತ್ರಗಳು, ಇನ್ನಿತರೆ ಕಡತಗಳು ನೀರಿನಲ್ಲಿ ಮುಳುಗಿ ಹಾನಿಯಾಗಿವೆ. ಬೆಳಗ್ಗೆ ಎಂದಿನಂತೆ ಸಿಬ್ಬಂದಿ ಕೊಠಡಿಗೆ ಬಂದು ಪರಿಶೀಲನೆ ನಡೆಸಿದಾಗ ನೀರು ನುಗ್ಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಕೊಠಡಿ ಸಿಬ್ಬಂದಿ, ನೀರಿಗೆ ಹಾನಿಯಾಗಿದ್ದ ಬಂದೂಕು, ಕಡತಗಳನ್ನು ರಕ್ಷಣೆ ಮಾಡಿ, ಪರಿಶೀಲನೆ ನಡೆಸಿದರು.

 

 

LEAVE A REPLY

Please enter your comment!
Please enter your name here