ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ-2 ಮಸೀದಿಗಳಲ್ಲಿ ನಾಲ್ವರ ಅಂತ್ಯಸಂಸ್ಕಾರ

ಮಂಗಳೂರು(ಉಡುಪಿ): ಉಡುಪಿಯ ಮಲ್ಪೆ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಶ್ರೀಘದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ವಿಶ್ವಾಸ ಉಡುಪಿ ಎಸ್ಪಿ ಡಾ.ಅರುಣ್ ವ್ಯಕ್ತಪಡಿಸಿದ್ದಾರೆ. ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದ್ದು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. ಕೌಟುಂಬಿಕ ಕಾರಣ, ಪೂರ್ವದ್ವೇಷ ಅಥವಾ ವ್ಯವಹಾರ ಮತ್ತಿತರ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು. ಕೊಲೆಯಾದ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವ ಕಡೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಕರಾವಳಿ ಜಂಕ್ಷನ್ ಗಳ ಸಿಸಿಟಿವಿ ಫೂಟೇಜ್ ಕಲೆ ಹಾಕುತ್ತಿದ್ದು, ಆರೋಪಿಯನ್ನು ಶ್ರೀಘದಲ್ಲಿ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ಉಡುಪಿ ನಗರದ ಎರಡು ಮಸೀದಿಗಳಲ್ಲಿ ನಾಲ್ಕು ಪಾರ್ಥಿವ ಶರೀರಗಳ ದಫನಕಾರ್ಯ ವಿಧಿ ವಿಧಾನಗಳೊಂದಿಗೆ ನೆರವೇರಿತು. ಸೌದಿ ಅರೇಬಿಯಾದಲ್ಲಿದ್ದ ಮೃತ ಹಸೀನಾ ಪತಿ ನೂರ್ ಮೊಹಮ್ಮದ್‌ ಸೇರಿದಂತೆ ಹಲವು ಮಂದಿ ಪೊಲೀಸರು, ಸಂಬಂಧಿಕರು  ಸಾವಿರಾರು ನಾಗರಿಕರು ಅಂತ್ಯಸಂಸ್ಕಾರದಲ್ಲಿ ಭಾಗವಹಸಿದ್ದರು.

LEAVE A REPLY

Please enter your comment!
Please enter your name here